Wednesday, July 22, 2020

ಚಟುವಟಿಕೆ 9

                                     ಚಟುವಟಿಕೆ :09                     "ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬೆಳೆಸಿಕೊಂಡಿರುವ"

                                          "ನಹಿ ಜ್ಞಾನೇನ ಸದೃಶಂ"
                  ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ. "ಜ್ಯೋತಿ ತಾ ಬೆಳಗದೆ ಬೆಳಗುವುದೇ ಜಗವ" ಎಂಬಂತೆ ಬೆಳಕಿನ ಮೂಲವೇ ಜ್ಯೋತಿ,  ಆ ಜ್ಯೋತಿಯು ತನ್ನ ತಾ ಬೆಳಗದೆ ಜಗತ್ತ್ ನ್ನು ಹೇಗೆ ಬೆಳ ಗುತ್ತ ದೆ? ಹಾಗೆಯೇ ತನ್ನ ಜ್ಞಾನವೆಂಬ ಬೆಳಕಿನಿಂದ ಜಗತ್ತನ್ನೇ ನೋಡಬಲ್ಲ ವಿದ್ಯಾರ್ಥಿ ಗಳನ್ನು ಜ್ಞಾನದ ಬೆಳಕನ್ನು ಹಂಚುವ ಶಿಕ್ಷಕ ತನ್ನತಾ ಮೋದಲು ಬೆಳಗಬೇಕು .ಆವಾಗ ಮಾತ್ರ ಆತ ಜ್ಞಾನವೆಂಬ ಬೆಳಕಿನ ಮೂಲಕ ಅಜ್ಞಾನವೆಂಬ ಕತ್ತಲನ್ನು ಕಳೆಯುವ ಗುರುವಾಗತ್ತಾನೆ. ಹೀಗೆ ಶಿಕ್ಷಕರು ಗುರುಗಳು ಆಗಬೇಕಾದರೆ ಮೊದಲು ತನ್ನಲ್ಲಿಯ ಅಜ್ಞಾನವೆಂಬ ಕತ್ತಲೆಯನ್ನು ತೆಗೆಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಏಕೆಂದರೆ
                    ಸರ್ವಜ್ಞನೆಂಬುವನು ಗರ್ವದಿಂದಾವನೆ
                  ಸರ್ವರಲ್ಲಿ ಒಂದೊಂದು ನುಡಿ ಕಲಿತು ವಿದ್ಯೆಯ
                    ಪರ್ವತವೇ ಆದ ಸರ್ವಜ್ಞ!!
                 ಯಾರು ಹುಟ್ಟಿನಿಂದಲೇ ಸರ್ವವನ್ನು ಬಲ್ಲವರಿಲ್ಲ. ಆದರೆ ಸರ್ವವನ್ನು ಬಲ್ಲವರು ಆಗುವ ಪ್ರಯತ್ನ ಮಾಡುವ ಪ್ರಕ್ರಿಯೆ ಮಾತ್ರ ಜೀವನದುದ್ದಕ್ಕೂ ಮಾಡುತ್ತಾ ನಮ್ಮ ಬೋಧನಾ ವಿಷಯದಲ್ಲಿನ ಹಾಗೂ ಜಗತ್ತಿನಲ್ಲಿನ ಬಗೆಗಿನ ನಮ್ಮ ಅಜ್ಞಾನ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡಿಕೊಳ್ಳುತ್ತಾ , ನಮ್ಮ ನಾವು ಬೆಳಗುವ ಜ್ಞಾನ ಪಡೆಯುವ  ಕಾಯ ನಡೆಯುತ್ತಲೇ ಇರಬೇಕು.
               ಇಂತಹ ಒಂದು ಜ್ಞಾನ ಆರ್ಜಿತ ಗೊಂಡು ವೃತ್ತಿ ನೈಪುಣ್ಯತೆಯನ್ನು ಹೊಂದುವ ಪ್ರಕ್ರಿಯೆಯಲ್ಲಿ ನಮಗೆ ಸಹಕಾರಿಯಾದದ್ದು ಕರೋನಾ ರೋಗದ ನಿಮಿತ್ಯ ನೀಡಿದ್ದ ರಜಾದಿನಗಳ ಅವಧಿಯಲ್ಲಿ ನಮ್ಮ ಇಲಾಖೆಯು ನೀಡಿರುವ ಮನೆಯಿಂದಲೇ ಕೆಲಸ ದಡಿಯಲ್ಲಿ ನೀಡಲಾದ ಚಟುವಟಿಕೆಗಳು.
              ನಮ್ಮ ವೃತ್ತಿ ಜೀವನದಲ್ಲಿ ಹಲವಾರು ಪರಿಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸಿದ್ದೇವೆ. ಆದರೆ ಪರಿಕಲ್ಪನೆಗಳನ್ನು ಮೂಡಿಸುವ ಭರದಲ್ಲಿ ನಾವು ವಾಕ್ ಶೈಲಿ ಹಾಗೂ ದೇಹ ಭಾಷೆಯ ಕಡೆಗೆ ಗಮನಹರಿಸಿರಲಿಲ್ಲ. ಆದರೆ ಪರಿಕಲ್ಪನೆಗಳ ಆಡಿಯೋ ಹಾಗೂ ವಿಡಿಯೋ ಮಾಡುವ ಚಟುವಟಿಕೆಯು, ನಮ್ಮ ಬೋಧನೆಯನ್ನು ನಾವು "ಕೇಳುವ ಹಾಗೂ ನೋಡುವ "ಅವಕಾಶ ಒದಗಿಸಿ ಅವುಗಳಲ್ಲಿನ ದೋಷ ಸರಿಪಡಿಸುವ ಕೊಳ್ಳುವುದಕ್ಕೆ ಸಹಾಯ ವಾಗಿ ನಮ್ಮ ವೃತ್ತಿ ನೈಪುಣ್ಯಕ್ಕೆ ಎಡೆಮಾಡಿಕೊಟ್ಟಿತು.
           ಒಬ್ಬ ಉತ್ತಮ ವೃತ್ತಿಪರ ಶಿಕ್ಷಕನಾಗ ಬೇಕಾದರೆ ಅವನು ಮೊದಲು ಸಮಾಜಮುಖಿಯಾಗಬೇಕು, ಸಮಾಜದ ಆಶೋತ್ತರಗಳನ್ನು ಅರಿತವನು ಆಗಿರಬೇಕು ಹಾಗೂ ಸಮಾಜದ ನಂಬಿಕಸ್ಥನಾಗಿ ಇರಬೇಕು. ಆಗಮಾತ್ರ ಅವನಿಂದ ಸಮಾಜದ ಪ್ರಗತಿ ಸಾಧ್ಯ, ಈ ಸಮಾಜಮುಖಿ ವೃತ್ತಿಪರ ನೈಪುಣ್ಯತೆಗೆ ಸಹಕಾರಿಯಾಗಿದೆ ವರ್ಕ್ ಫ್ರಮ್ ಹೋಮ್ ಅಡಿಯಲ್ಲಿ ನೀಡಲಾದ, ಪ್ರತಿನಿತ್ಯ ಮೂರು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರೊಂದಿಗೆ ನಡೆಸಬೇಕೆಂದು ದೂರವಾಣಿ ಸಂಪರ್ಕ.
               ಸುಮಾರು 10,000 ಗಂಟೆಗಳ ಕಾಲ ಒಂದು ವಿಷಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ, ತೊಡಗಿಸಿಕೊಂಡ ವಿಷಯದಲ್ಲಿ ಪ್ರಭುತ್ವ ಸಾಧಿಸಬಹುದೆಂಬ ವಿದ್ವಾಂಸರ ಅಭಿಪ್ರಾಯದಂತೆ ಕೆಲ ಸಮಯಗಳ ಕಾಲ ನಾವು ಬೋಧಿಸುವ ವಿಷಯದಲ್ಲಿ ಪ್ರಭುತ್ವ ಸಾಧನೆಗೆ ಅವಕಾಶ ಮಾಡಿಕೊಟ್ಟ ಅಂತರ್ಜಾಲದಲ್ಲಿ ವಿಷಯಕ್ಕೆ ಸಂಬಂಧಿಸಿದ 20 ವಿಡಿಯೋಗಳನ್ನು ನೋಡಿ ಮಾಡಲಾದ ಸಾರಸಂಗ್ರಹ ಚಟುವಟಿಕೆ.
               ಇವುಗಳಾ  ಜೊತೆ  ಜೊತೆಗೆ ಪಾಠ ಯೋಜನೆ, ಶಿಕ್ಷಣ ಇಲಾಖೆಯು ಆಯೋಜಿಸಿರುವ ವಿಜ್ಞಾನ ವಿಷಯದ ಕುರಿತ ತರಬೇತಿ ಕಾರ್ಯಗಾರ, ಬೋಧಿಸುವ ವಿಷಯಗಳಲ್ಲಿ ರಸಪ್ರಶ್ನೆಗಳ ಬ್ಯಾಂಕ್ ತಯಾರಿ, ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು.
            ಒಟ್ಟಾರೆಯಾಗಿ,
                                "ಆಲಸ್ಯಂ ಅಮೃತಂ ವಿಷಂ"                                                                                    ಆಲಸ್ಯದಿಂದ ಅಮೃತವೂ ವಿಷವಾಗುತ್ತದೆ. ಆಲಸ್ಯ ಮನುಷ್ಯನ ಶರೀರದಲ್ಲಿ ಹುದುಗಿದ ಮಹಾ ವೈರಿ ಆಲಸ್ಯ ಯಾವಾಗಲೂ ಮನುಷ್ಯನ ಮೇಲೆ ಮಹಾಯುದ್ಧಕ್ಕೆ ಹರಿಹಾಯ್ದು ಅವನನ್ನು ತುಕ್ಕುಹಿಡಿದ ಕಬ್ಬಿಣದಂತೆ ನಿಷ್ಪ್ರಯೋಜಕ ನಾಗುವಂತೆ ಮಾಡುವ ತುರಾತುರಿಯಲ್ಲಿ ಇರುತ್ತದೆ. ಆದರೆ ನಮ್ಮ ಇಲಾಖೆಯು ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕಕ್ಕೆ ಮಾದರಿಯಾಗುವಂತೆ ನೀಡಲಾದ, ನಮ್ಮ ವಿಭಾಗದ ಮಾನ್ಯ ಅಪರ ಆಯುಕ್ತರ ನೇತೃತ್ವದಲ್ಲಿನ ಚಟುವಟಿಕೆಗಳು , ನಮ್ಮ ವೃತ್ತಿ ನೈಪುಣ್ಯತೆಗೆ ಸಹಕಾರಿಯಾಗಿದ್ದು, "ನಾಸ್ತಿ  ಜ್ಞಾನತ್ಪರಂ ಸುಖಂ" ಎಂದರೆ ಜ್ಞಾನಕ್ಕಿಂತ ಮಿಗಿಲಾದ ಸುಖವಿಲ್ಲ ಎಂಬಂತೆ ನೀಡಲಾದ ಚಟುವಟಿಕೆಗಳು  ವೃತ್ತಿ ನೈಪುಣ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದು ಅತಿ ಸುಖಮಯ ಹಾಗೂ ಸಂತಸದಾಯಕ ಆದ ಅನುಭವವಾಗಿತ್ತು.

No comments:

Post a Comment

ಜೀವಿ ಸಣ್ಣದೆಂದ ಮಾತ್ರಕ್ಕೆ ಜೀವನಪದ್ಧತಿ ಸಣ್ಣದಾಗಿರ ಇರಬೇಕೆಂದೆನಿಲ್ಲ

ಜೀವಿ ಸಣ್ಣದೆಂದ ಮಾತ್ರಕ್ಕೆ ಜೀವನಪದ್ಧತಿ ಸಣ್ಣದಾಗಿರ ಇರಬೇಕೆಂದೆನಿಲ್ಲ